ಕೇಳು ಜನಮೇಜಯನೆ

ಶನಿಯಂತೆ ನನ್ನ ಬೆನ್ನು ಹತ್ತಿದವನೆ
ನನ್ನ ಮಗನೇ ಜನಮೇಜಯನೆ
ಕೇಳು :
ನನ್ನ ನೆರಳಾಗಬೇಡ
ಬೆಳಕಾಗುವುದೂ ಬೇಡ
ನನ್ನ ಧ್ವನಿಯಾಗಬೇಡ
ಪರಾಕು ಕೂಗಬೇಡ
ಮೂರು ಕಾಸಿನವನೆ
ನನ್ನ ಮುಖಕ್ಕೆ ಕನ್ನಡಿಯಾಗದಿರಯ್ಯ
ಕಾಫಿ ಹೋಟೆಲಿನಲ್ಲಿ ಸಿನಿಮಾದಲ್ಲಿ ಧ್ಯಾನದಲ್ಲಿ
ಎಲ್ಲೆಲ್ಲು ಬೆಂಬತ್ತಿ ಹಲ್ಲು ಗಿಂಜದಿರಯ್ಯ ಎಂಥಾ ಧೈರ್ಯ
ಹಳೆ ವಠಾರದ ವಾಸನೆ ಸೂಸುವವನೆ
ಅಪಾಯದ ತಲೆಬುರುಡೆಯವನೆ
ಎಲೆಹುಳದಂತೆ ಕುಪ್ಪಳಿಸುವವನೆ
ಆಚೆಗೆ ನೆಗೆ
ತೆಗೆ ಇಲ್ಲಿಂದ ನಿನ್ನ ಬಿಡಾರ ನಕ್ಷತ್ರಕನೆ
ಹುಗಿದುಹೋಗು ಬಿದ್ದ ನಿನ್ನೆಗಳಲ್ಲಿ
ನಾನು ಉಸಿರಾಡುವುದಕ್ಕೆ ಬಿಡು ಸ್ವಚ್ಛಂದದಲ್ಲಿ
ಬಡ್ಡೀಮಗನೆ ಥೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರದಕ್ಷಿಣಿ ನಿರ್ಮೂಲನ
Next post ಗುರು ನಮನ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys